Menu

ಪಟ್ಟಾಜೆ ಸೇವಾ ಗ್ರಾಮದ ಉದ್ಘಾಟನೆ

  • Published in ಕೇರಳ
  • Read 22 times
  • Comments::DISQUS_COMMENTS
ಬದಿಯಡ್ಕ: ಬದಿಯಡ್ಕ ಗ್ರಾ.ಪಂ.ನ 14ನೇ ವಾರ್ಡ್ ಪಟ್ಟಾಜೆಯ ಸೇವಾ ಗ್ರಾಮದ ಉದ್ಘಾಟನೆ ಜರಗಿತು. ಗ್ರಾ.ಪಂ. ಉಪಾಧ್ಯಕ್ಷ ಕೆ.ಎನ್. ಕೃಷ್ಣ ಭಟ್ ನೆರವೇರಿಸಿ ಮಾತನಾಡಿ, ಸೇವಾ ಗ್ರಾಮದ ಮೂಲಕ ಗ್ರಾ.ಪಂ.ನ ಸೌಲಭ್ಯಗಳು ವಾರ್ಡ್ ಜನತೆಗೆ ಸುಲಭವಾಗಿ ಲಭಿಸಲು ಸೇವಾ ಗ್ರಾಮವು ಸಹಕಾರಿಯಾಗಲಿದೆ. ಇದರ ಪ್ರಯೋಜನವನ್ನು ಸ್ಥಳೀಯರು ಪಡೆದು ಕೊಳ್ಳಬೇಕು ಎಂದು ನುಡಿದರು.
 
ಗ್ರಾ.ಪಂ. ಸದಸ್ಯ ಮಹೇಶ್ ವಳಕುಂಜ ಅವರು ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಖಾತರಿ ಯೋಜನೆಯ ಇಂಜಿನಿಯರ್ ಸುಚಿತ್ರಾ, ಅಂಗನವಾಡಿ ಕಾರ್ಯಕರ್ತೆ ಚಿತ್ರಕಲಾ, ಮಾಜಿ ಜನಪ್ರತಿನಿಧಿ ಕಮಲಾ ಪಟ್ಟಾಜೆ, ರಾಮ ಪಟ್ಟಾಜೆ, ಕೃಷ್ಣ ಬದಿಯಡ್ಕ, ಐತ್ತಪ್ಪ ಪಟ್ಟಾಜೆ ಮೊದಲಾದವರು ಭಾಗವಹಿಸಿದ್ದರು.
More in this category: « ರಸ್ತೆಯಲ್ಲಿ ಡೀಸೆಲ್ ಹರಿದು ದ್ವಿಚಕ್ರ ವಾಹನಗಳು ಪಲ್ಟಿ ಮಕ್ಕಳ ಆಕರ್ಷಿಸಲು ಪ್ರವೇಶೋತ್ಸವ ಸಹಕಾರಿಯಾಗಲಿ: ಸೌಮ್ಯಾ ಮಹೇಶ್ »
back to top