Menu

ಮದುವೆ ಮನೆಯಲ್ಲಿ ಹೈಡ್ರಾಮ: ಎರಡನೇ ಮದುವೆ ನಿಲ್ಲಿಸಿದ ಪತ್ನಿ: ವಧುವಿಗೆ ಲೈಫ್ ಕೊಟ್ಟ ಯುವಕ

  • Published in ಉಡುಪಿ
  • Read 52 times
  • Comments::DISQUS_COMMENTS
ಕುಂದಾಪುರ: ಮದುವೆಯೊಂದರ ಸಂಭ್ರಮ ಅಲ್ಲಿ ಜೋರಾಗಿತ್ತು. ಮಧ್ಯಾಹ್ನ ಮುಹೂರ್ತದ ಸಮಯಕ್ಕೆ ಆಗಮಿಸಿದ್ದಳು ನೋಡಿ ವರ ಮಹಾಶಯನ ಮೊದಲ ಪತ್ನಿ. ನಡೆಯುವ ಎರಡನೇ ಮದುವೆ ನಿಂತಿತ್ತು. ವರಮಹಾಶಯನ ಹಳೆ ಮದುವೆ ವಿಚಾರದ ಗುಟ್ಟು ರಟ್ಟಾಗಿತ್ತು, ಹೊಸ ಮದುವೆ ಮುರಿದು ಬಿದ್ದಿತ್ತು. ಇಷ್ಟೆಲ್ಲಾ ನಡೆದಿದ್ದು ಕೋಟ ಠಾಣೆ ವ್ಯಾಪ್ತಿಯ ಗುರುವಾರ ಮಣೂರಿನ ಕಲ್ಯಾಣ ಮಂದಿರವೊಂದರಲ್ಲಿ.
 
 
ಬೆಂಗಳೂರು ಕನಕಪುರದ ಆರೋಹಳ್ಳಿ ಮೂಲದ ಸರಸ್ವತಿಗೆ ಮಿಸ್ ಕಾಲ್ ಮೂಲಕ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಭೂಪನೇ ಕೋಟ ಸಮೀಪದ ಕಾರ್ತಟ್ಟು ನಿವಾಸಿ ಮಣಿಪಾಲದ ಸಂಸ್ಥೆಯೊಂದರ ಉದ್ಯೋಗಿ ಶಂಕರ್. ನಾಲ್ಕು ವರ್ಷಗಳ ಹಿಂದಿನ ಮೊಬೈಲ್ ಪರಿಚಯ ಪ್ರೇಮ ಪ್ರಣಯಕ್ಕೆ ತಿರುಗಿ ಕಳೆದ ವರ್ಷ ಬೆಂಗಳೂರಿನ ಬೋಳಾರೆ ಮುನೇಶ್ವರ ದೇವಸ್ಥಾನದಲ್ಲಿ ಸರಸ್ವತಿ ಸಂಬಂಧಿಕರ ಸಮಕ್ಷದಲ್ಲಿ ಸತಿಪತಿಯಾಗಿದ್ದರು. ಮಣಿಪಾಲದಲಿ ಕೆಲಸ ಮಾಡಿಕೊಂಡಿದ್ದ ಈ ಶಂಕರ ಆಗಾಗ್ಗೇ ಬೆಂಗಳೂರಿಗೆ ಹೋಗಿ ಪತ್ನಿಯೊಂದಿಗೆ ಇದ್ದು ಬರುತ್ತಿದ್ದ. ಪತ್ನಿ ಈತನ ಫೋಷಕರ ಬಗೆ ಕೇಳಿದ್ದಗಲೆಲ್ಲಾ, ಈಗಲೇ ಮದುವೆ ವಿಚಾರ ತಿಳಿಸುವುದು ಬೇಡ ತಂದೆ ತಾಯಿಗೆ ಅನಾರೋಗ್ಯವಿದೆ ಎಂದೆಲ್ಲಾ ಕಥೆ ಹೆಣೆದಿದ್ದ. ಮನೆಯಲ್ಲೂ ಮದುವೆ ಬೇಡ ಎಂದೇ ಹೇಳಿಕೊಂಡು ಬಂದಿದ್ದ. ಆದರೇ ಮನೆಯವರು ನಾಗೂರಿನ ಯುವತಿಯೋರ್ವಳನ್ನು ಗೊತ್ತು ಮಾಡಿ ಮದುವೆ ನಿಶ್ಚಯಿಸಿ ಗುರುವಾರ ಮಣೂರಿನ ಕಲ್ಯಾಣ ಮಂದಿರದಲ್ಲಿ ಮದುವೆ ಫಿಕ್ಸ್ ಮಾಡಿದ್ರು.

ಎರಡು ತಿಂಗಳ ಹಿಂದೆ ಶಂಕರ ತಾನೂ ಚೆನ್ನೈಗೆ ತೆರಳುತ್ತಿದ್ದು ಸ್ವಲ್ಪ ದಿನಗಳ ಕಾಲ ಸಿಗಲಾಗೊಲ್ಲ ಎಂದು ಸರಸ್ವತಿಗೆ ಹೇಳಿ ಬಂದಿದ್ದ. ಆದರೇ ಎರಡು ತಿಂಗಳಾದರೂ ಕೂಡ ಸರಸ್ವತಿಯನ್ನು ನೋಡಲು ಹೋಗದಿದ್ದಾಗ ಆಕೆಗೂ ಅನುಮಾನ ಬಂದಿದೆ. ಈಕೆ ಕಳೆದ ಮೂರು ದಿನಗಳ ಹಿಂದೆ ಶಂಕರನ ಸ್ನೇಹಿತನಿಗೆ ಫೋನಾಯಿಸಿ ವಿಚಾರವೇನೆಂದು ಕೇಳಿದ್ದಾಳೆ. ಆಗಲೇ ಅಕೆಗೆ ಶಾಕ್ ಕಾದಿತ್ತು. ತಾನೂ ನಂಬಿ ಪ್ರೀತಿಸಿ ಮದುವೆಯಾಗಿದ್ದ ಶಂಕರ ಇನ್ನೊಬ್ಬಾಕೆಯನ್ನು ವರಿಸುತ್ತಾನೆಂಬ ವಿಚಾರ ತಿಳಿದಿತ್ತು. ಕೂಡಲೇ ಆರೋಹಳ್ಳಿ ಪೊಲೀಸ್ ಠಾಣೆಗೆ ಹೋದ ಈಕೆ ಅಲ್ಲಿನ ಪೊಲೀಸರೊಂದಿಗೆ ವಿಚಾರ ತಿಳಿಸಿ ಅವರೊಂದಿಗೆ ಹಾಗೂ ತನ್ನ ತಾಯಿ ಹಾಗೂ ಸೋದರತ್ತೆಯೊಂದಿಗೆ ಬುಧವಾರ ಬೆಂಗಳುರಿನಿಂದ ಕೋಟಕ್ಕೆ ಹೊರಟು ಗುರುವಾರ ಬೆಳಿಗ್ಗೆ ಬಂದಿಳಿದಿದ್ದಾಳೆ. ಮುಹೂರ್ತದ ಸಮಯಕ್ಕೆ ಮಣೂರಿನ ಕಲ್ಯಾಣ ಮಂದಿರಕೆ ಪೊಲೀಸರು ಹಾಗೂ ಪೋಷಕರೊಡಗೂಡಿ ಹೋದ ಸರಸ್ವತಿ ಮದುವೆ ಹುಡುಗಿ ಹಾಗೂ ಶಂಕರನ ಕಡೆಯವರಲ್ಲಿ ವಿಚಾರ ಹೇಳಿದ್ದಾಳೆ. ಈ ಸಮಯ ಮದುವೆ ನಿಂತು ಶಂಕರನನ್ನು ಪೊಲೀಸರು ವಶಕ್ಕೂ ಪಡೆದರು.

ನಾಗೂರಿನ ಯುವತಿ ಇಷ್ಟೆಲ್ಲಾ ರಾದ್ದಾಂತ ಕಂಡು ದಂಗಾಗಿದ್ದಳು. ಕೂಡಲೇ ಎರಡು ಕಡೆಯವರ ಸಮಯಪ್ರಜ್ನೆಯಿಂದ ನಡೆಯಬೇಕಿದ್ದ ಸುಮೂಹುರ್ತದಲ್ಲಿಯೇ ನಾಗೂರಿನ ಮದುಮಗಳ ಮದುವೆ ಶಂಕರನ ಸಂಬಂಧಿಕ ದೇವೇಂದ್ರನ ಜೊತೆ ನಡೆದಿತ್ತು. ಮದುವೆಗೆ ಬಂದವರು ವಧು-ವರನನ್ನು ಹಾರೈಸಿ ಶುಭ ಕೋರಿದರು.

ಇನ್ನೊಂದೆಡೆ ಪೊಲಿಸ್ ಠಾಣೆಯಲ್ಲಿ ಪೊಲಿಸರು, ಮಹಿಳಾ ಸಾಂತ್ವಾನ ಕೇಂದ್ರದವರು ಹಾಗೂ ಬೆಂಗಳೂರಿನ ಸರಸ್ವತಿ ಸಂಬಂಧಿಕರು ಮಾತುಕತೆ ನಡೆಸಿ ಶಂಕರ್ ಹಾಗೂ ಸರಸ್ವತಿ ಮದುವೆಯನ್ನು ಶುಕ್ರವಾರ ಶಾಸ್ತ್ರೋಕ್ತವಾಗಿ ನಡೆಸುವ ಆಲೋಚನೆಯನ್ನು ಮಾಡಿದ್ದಾರೆ. ಅಲ್ಲದೇ ಶಂಕರ್ ಕೂಡ ಸರಸ್ವತಿಗೆ ಬಾಳು ಕೊಡಲು ಒಪ್ಪಿದ್ದಾನೆ. ಇತ್ತ ಮದುವೆ ನಿಂತಿದ್ದ ವಧುವಿಗೆ ಲೈಫ್ ಕೊಡುವ ಮೂಲಕ ಶಂಕರನ ಸಂಬಂಧಿಕ ದೇವೇಂದ್ರ ಹೀರೋ ಆಗಿದ್ದಾನೆ.
More in this category: « ವಾರಿಯರ್ ಚಿತ್ರೀಕರಣದಿಂದ ಟ್ರಾಫಿಕ್ ಜಾಮ್ ಶ್ರೀ ರಾಮ ನಾಮ ತಾರಕ ಮಂತ್ರ ಏಕಾಹ »
back to top