ಪಡೀಲ್ ಬಜಾಲ್ ಕೆಳ ಸೇತುವೆ ಯೋಜನೆ ಜೂನ್ ಗೆ ಪೂರ್ಣ: ಡಿವಿಎಸ್
- Published in ಮಂಗಳೂರು
- Read 37 times
- Comments::DISQUS_COMMENTS
ಮಂಗಳೂರು: ಪಡೀಲ್ ಬಜಾಲ್ ರಸ್ತೆ ನಡುವಿನ ರೈಲ್ವೆ ಕ್ರಾಸಿಂಗ್ನಲ್ಲಿ ಕೆಳ ಸೇತುವೆ ಯೋಜನೆಯೂ ಜೂನ್ ಅಂತ್ಯದೊಳಗೆ ಸಿದ್ದವಾಗಲಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.
ಬಿ.ಸಿ. ರೋಡ್ನಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರಕಾರ 22.5 ಕೋಟಿ ರೂ. ಮತ್ತು ಬಿ.ಸಿ.ರೋಡ್ನಿಂದ ಮಾ ಣಿವರೆಗಿನ ರಸ್ತೆ ವಿಸ್ತರಣೆಗೆ ಏಳು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಅಡ್ಡಹೊಳೆಯಿಂದ ಮಾಣಿ ತನಕ ರಸ್ತೆ ವಿಸ್ತರಣೆ ಮಾಡಲಾಗಿದೆ ಎಂದರು.
ಮೇಕೆದಾಟು ಯೋಜನೆಯ ವಿಷಯದಲ್ಲಿ ತಮಿಳುನಾಡು ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿದೆ. ನಮ್ಮ ನೀರು ನಮ್ಮ ಯೋಜನೆ ಅದರ ಬಗ್ಗೆ ಮಾತನಾಡುವ ಅಧಿಕಾರ ತಮಿಳುನಾಡಿಗಿಲ್ಲ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಲಾಭವಿದೆ. ಕಾವೇರಿ ನೀರಿನೊಂದಿಗೆ ಈ ಯೋಜನೆಯಿಂದ ಲಭ್ಯವಾಗುವ ನೀರನ್ನು ಅವರಿಗೆ ಬಿಡುತ್ತಿದ್ದೆವು. ಕಾವೇರಿ ನೀರಿನಲ್ಲಿ ಮಾಡಿದ ರಾಜಕೀಯವನ್ನೇ ಇಲ್ಲೂ ಮಾಡುತ್ತಿದ್ದಾರೆ ಎಂದರು.
Tweet