ಗ್ರಾ.ಪಂ ಫಲಿತಾಂಶ ಪ್ರಕಟ: ವಿಜಯಿಗಳಿಂದ ಸಂಭ್ರಮಾಚರಣೆ
- Published in ಮಂಗಳೂರು
- Read 43 times
- Comments::DISQUS_COMMENTS
ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಮತಎಣಿಕೆ ಭರದಿಂದ ಸಾಗಿದ್ದು, 181 ಕ್ಷೇತ್ರಗಳ ಮತಎಣಿಕೆ ಪೂರ್ಣಗೊಂಡಿದೆ. ಫಲಿತಾಂಶ ಪ್ರಕಟವಾದ ನಂತರ ಅಭ್ಯರ್ಥಿಗಳ ಬೇಂಬಲಿಗರು ಮತೆಣಿಕೆ ಕೇಂದ್ರದ ಮುಂದೆ ವಿಯೋತ್ಸವ ಆಚರಿಸಿದರು.
ಮನ್ನಬೆಟ್ಟು ವಾರ್ಡ್1 ರ ಮೀನಾಕ್ಷಿ, ಕಾಂಗ್ರೆಸಿನ ದೇವಿ ಪ್ರಸಾದ್ ಶೆಟ್ಟಿ, ಬೆಳಪು ವಾರ್ಡ್ನಿಂದ ಸುರೇಂದ್ರ ಜೋಕಟ್ಟೆ ಪಂಚಾಯತ್ನಿಂದ, ಬಿಜೆಪಿಯ ವಿದ್ಯಾ ಶೆಟ್ಟಿ ಬೊಳಿಯಾರ್ ವಾರ್ಡ್ 1 ರಿಂದ,ಸ್ವತಂತ್ರ ಅಭ್ಯರ್ಥಿ ಇಖ್ಬಾಲ್ರವರು ಕೊಣಾಜೆ ಯಿಂದ, ಜೆರಿ ಡಿಸೋಜ ರವರು ಬೆಳ್ಮಾಣ್ ಪಂಚಾಯತ್ನಿಂದ ವಿಜಯಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿಬಜೆ ಮತ್ತು ಕಳಮಂಜದಲ್ಲಿ ಬಿಜೆಲಿಯ ಅಭ್ಯರ್ಥಿಗಳು ಗೆದ್ದಿದ್ದರೆ, ಹೊಸಂಗಡಿಯಲ್ಲಿ ಕಾಂಗ್ರೆಸಿನ ಎಲ್ಲಾ ಆಭ್ಯರ್ಥಿಗಳು ಗೆದ್ದಿದ್ದಾರೆ. ಪದವೆಟ್ಟುವಿನಲ್ಲಿ ಕಾಂಗ್ರೆಸಿನ 5 ಸೀಟುಗಳು ಗೆದ್ದಿದ್ದರೆ ಬಿಜೆಪಿಯ 4 ಸೀಟುಗಳು ಗೆದ್ದಿವೆ.
ಬೆಳ್ತಂಗಡಿ ತಾಲೂಕಿನ ಶಿಬಜೆ ಮತ್ತು ಕಳಮಂಜದಲ್ಲಿ ಬಿಜೆಲಿಯ ಅಭ್ಯರ್ಥಿಗಳು ಗೆದ್ದಿದ್ದರೆ, ಹೊಸಂಗಡಿಯಲ್ಲಿ ಕಾಂಗ್ರೆಸಿನ ಎಲ್ಲಾ ಆಭ್ಯರ್ಥಿಗಳು ಗೆದ್ದಿದ್ದಾರೆ. ಪದವೆಟ್ಟುವಿನಲ್ಲಿ ಕಾಂಗ್ರೆಸಿನ 5 ಸೀಟುಗಳು ಗೆದ್ದಿದ್ದರೆ ಬಿಜೆಪಿಯ 4 ಸೀಟುಗಳು ಗೆದ್ದಿವೆ.
Tweet