ಲಾರಿ ಢಿಕ್ಕಿ ಹೊಡೆದು ಸ್ಕಾರ್ಪಿಯೋ ಪಲ್ಟಿ
- Published in ಬಂಟ್ವಾಳ
- Read 36 times
- Comments::DISQUS_COMMENTS
ಬಂಟ್ವಾಳ: ಲಾರಿಯೊಂದು ತಾಗಿದ ಪರಿಣಾಮ ಸ್ಕಾರ್ಪಿಯೊ ವಾಹನವೊಂದು ರಸ್ತೆ ಬದಿಗೆ ಮಗುಚಿಬಿದ್ದ ಘಟನೆ ಸೋಮವಾರ ಪುಂಜಾಲಕಟ್ಟೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಸ್ಕಾರ್ಪಿಯೋದಲ್ಲಿದ್ದ ಮೂವರು ಮಕ್ಕಳ ಸಹಿತ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿಗೆ ಸಮೀಪದ ಕಂಗಿತ್ತಿಲು ನಿವಾಸಿ ದಿವಾಕರ ಶೆಟ್ಟಿ ಎಂಬವರು ತನ್ನ ಅಕ್ಕನ ಮೂವರು ಮಕ್ಕಳ ಸಹಿತ ಸ್ಕಾರ್ಪಿಯೊದಲ್ಲಿ ಮಡಂತ್ಯಾರಿನಿಂದ ಪುಂಜಾಲಕಟ್ಟೆಗೆ ಬರುತ್ತಿದ್ದ ವೇಳೆ ಬಸವನಗುಡಿ ಸಮೀಪ ಟಿಪ್ಪರ್ವೊಂದು ಹಿಂದಿನಿಂದ ಓವರ್ಟೇಕ್ ಮಾಡುವ ರಭಸದಲ್ಲಿ ತಾಗಿಸಿಕೊಂಡು ಹೋಗಿತ್ತು. ಪರಿಣಾಮ ಸ್ಕಾರ್ಪಿಯೋ ಅಡಿಮೇಲಾಗಿ ರಸ್ತೆ ಬದಿಗೆ ಮಗುಚಿ ಬಿದ್ದಿತ್ತು.
ಈ ವೇಳೆ ಡೋರ್ಲಾಕ್ ಆಗಿ ಸುಮಾರು 20 ನಿಮಿಷ ಸ್ಕಾರ್ಪಿಯೊದ ಒಳಗಿದ್ದವರು ವಾಹನದೊಳಗೆ ಬಂಧಿ ಯಾಗಿದ್ದರು. ಅಪಘಾತ ನಡೆದ ಪ್ರದೇಶದಲ್ಲಿ ಜನಸಂಚಾರ ವಿರಳವಾಗಿದ್ದುದರಿಂದ ಘಟನೆ ತತ್ಕ್ಷಣ ಯಾರ ಗಮನಕ್ಕೂ ಬಂದಿರಲಿಲ್ಲ. ಬಳಿಕ ದಿವಾಕರ ಅವರು ವಾಹನದ ಕಿಟಕಿ ಗಾಜು ಒಡೆದು ಹೊರಬರಬೇಕಾಯಿತು. ಅಪಘಾತದಲ್ಲಿ ಸ್ಕಾರ್ಪಿಯೋ ನಜ್ಜುಗುಜ್ಜಾಗಿದೆ. ಘಟನೆ ಕುರಿತು ದಿವಾಕರ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
ಇಲ್ಲಿಗೆ ಸಮೀಪದ ಕಂಗಿತ್ತಿಲು ನಿವಾಸಿ ದಿವಾಕರ ಶೆಟ್ಟಿ ಎಂಬವರು ತನ್ನ ಅಕ್ಕನ ಮೂವರು ಮಕ್ಕಳ ಸಹಿತ ಸ್ಕಾರ್ಪಿಯೊದಲ್ಲಿ ಮಡಂತ್ಯಾರಿನಿಂದ ಪುಂಜಾಲಕಟ್ಟೆಗೆ ಬರುತ್ತಿದ್ದ ವೇಳೆ ಬಸವನಗುಡಿ ಸಮೀಪ ಟಿಪ್ಪರ್ವೊಂದು ಹಿಂದಿನಿಂದ ಓವರ್ಟೇಕ್ ಮಾಡುವ ರಭಸದಲ್ಲಿ ತಾಗಿಸಿಕೊಂಡು ಹೋಗಿತ್ತು. ಪರಿಣಾಮ ಸ್ಕಾರ್ಪಿಯೋ ಅಡಿಮೇಲಾಗಿ ರಸ್ತೆ ಬದಿಗೆ ಮಗುಚಿ ಬಿದ್ದಿತ್ತು.
ಈ ವೇಳೆ ಡೋರ್ಲಾಕ್ ಆಗಿ ಸುಮಾರು 20 ನಿಮಿಷ ಸ್ಕಾರ್ಪಿಯೊದ ಒಳಗಿದ್ದವರು ವಾಹನದೊಳಗೆ ಬಂಧಿ ಯಾಗಿದ್ದರು. ಅಪಘಾತ ನಡೆದ ಪ್ರದೇಶದಲ್ಲಿ ಜನಸಂಚಾರ ವಿರಳವಾಗಿದ್ದುದರಿಂದ ಘಟನೆ ತತ್ಕ್ಷಣ ಯಾರ ಗಮನಕ್ಕೂ ಬಂದಿರಲಿಲ್ಲ. ಬಳಿಕ ದಿವಾಕರ ಅವರು ವಾಹನದ ಕಿಟಕಿ ಗಾಜು ಒಡೆದು ಹೊರಬರಬೇಕಾಯಿತು. ಅಪಘಾತದಲ್ಲಿ ಸ್ಕಾರ್ಪಿಯೋ ನಜ್ಜುಗುಜ್ಜಾಗಿದೆ. ಘಟನೆ ಕುರಿತು ದಿವಾಕರ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
Tweet