ಬದಿಯಡ್ಕ ವಿದ್ಯಾಪೀಠದಲ್ಲಿ ಶಾಲಾ ಪ್ರವೇಶೋತ್ಸವ
- Published in ಕಾರ್ಕಳ
- Read 39 times
- Comments::DISQUS_COMMENTS
ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 2015-16ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ಸೋಮವಾರ ನಡೆಯಿತು. ಬೆಳಗ್ಗೆ ವೇ.ಮೂ.ಕುಮಾರ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ ಜರಗಿತು. 10 ಘಂಟೆಗೆ ನಡೆದ ಸಭಾಕಾರ್ಯಕ್ರವನ್ನು ನಿವೃತ್ತ ಮುಖ್ಯೋಪಾಧ್ಯಾಯ ರಾಮಭಟ್ ಎಡೆಕ್ಕಾನ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಕತ್ತಲೆಯು ದೂರವಾಗಿ ಬೆಳಕು ಚೆಲ್ಲಲಿ ಎಂದರು. ಇಂದಿನ ಮಕ್ಕಳಿಗೆ ಪೂರ್ಣ ಸವಲತ್ತುಗಳು ಶಾಲೆಗಳಲ್ಲಿ ಸಿಗುತ್ತದೆ. ಮಕ್ಕಳು ಅದನ್ನು ಸಮಯೋಚಿತವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಕಠಿಣವಾಗಿ ದುಡಿಯುವ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ ಎಂದರು. ಶಾಲೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಧಿಗಳನ್ನೂ, ಸಮಾಜಸೇವಕರನ್ನೂ, ಅಧಿಕಾರಿಗಳು, ಆಡಳಿತ ವರ್ಗದವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರು ಈ ಶೈಕ್ಷಣಿಕ ವರ್ಷವನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.
10ನೇ ತರಗತಿಯ ಅನುಶ್ರಿ ಕಾರ್ಯಕ್ರಮ ನಿರೂಪಣೆ ಮಾಡಿದರು. 10ನೇ ತರಗತಿಯ ದೀಕ್ಷಿತಾ ಸ್ವಾಗತಿಸಿದರು. 10ನೇ ತರಗತಿಯ ರವಿಕೃಷ್ಣ ಧನ್ಯವಾದ ಅರ್ಪಿಸಿದನು.
Tweet