Menu

ಕನ್ನೆಪ್ಪಾಡಿಯಲ್ಲಿ ಹೆಣ್ಮಕ್ಕಳ ವಸಂತ ಶಿಬಿರ ಸಮಾರೋಪ

  • Published in ಕೇರಳ
  • Read 25 times
  • Comments::DISQUS_COMMENTS
ಬದಿಯಡ್ಕ: ಕನ್ನೆಪ್ಪಾಡಿಯಲ್ಲಿ ಕನ್ನೆಪ್ಪಾಡಿ ಜನಸೇವಾ ವಿಶ್ವಸ್ಥ ನಿಧಿ ಆಶ್ರಯದಲ್ಲಿ ನಡೆದ ಹೆಣ್ಣುಮಕ್ಕಳ ವಸಂತ ಶಿಬಿರ ಸಮಾರೋಪಗೊಂಡಿತು.
 
ಈ ಸಂದರ್ಭದಲ್ಲಿ ಬದಿಯಡ್ಕ ಭಾರತೀ ವಿದ್ಯಾಪೀಠ ಶಾಲೆಯ ಯೋಗ ಗುರು ಪುಂಡರೀಕಾಕ್ಷ ಮಾತೃಪೂಜೆಯ ಮಹತ್ವದ ಬಗ್ಗೆ ಬೌದ್ದಿಕ್ ನೀಡಿದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್,ಡಾ| ಶೈನಾ ರಾಜೇಶ್ ಅಗಲ್ಪಾಡಿ, ಬೆಳ್ಳೂರು ಪಂಚಾಯತ್ ಮಾಜಿ ಆದ್ಯಕ್ಷೆ ಮಾಲತಿ ಶಶಿಹಿತ್ಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬದಿಯಡ್ಕ ಗ್ರಾ.ಪಂ. ಸದಸ್ಯ ಮಂಜುನಾಥ ಮಾನ್ಯ, ಸೋಮನಾಥ ಮಾಸ್ಟರ್, ಕೃಷ್ಣ ಭಟ್ ಪುದುಕೋಳಿ, ಗಣೇಶ್ ಭಟ್ ಆಳಕೆ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಭಿರಾರ್ಥಿಗಳು ತಮ್ಮಹೆತ್ತವರಿಗೆ ಮಾತೃ ಪೂಜೆ ಮಾಡಿದರು. ಶ್ರೀವತ್ಸ ನೀರ್ಚಾಲು ಸ್ವಾಗತಿಸಿ, ಪ್ರವೀಣ್ ಶಿವಾಜಿ ಫ್ರೆಂಡ್ಸ್ ಕ್ಲಬ್ ನಿರೂಪಿಸಿದರು.
More in this category: « ಗೋ ಯಾತ್ರೆ: ಸೀತಾಂಗೋಳಿಯಲ್ಲಿ ಭವ್ಯ ಸ್ವಾಗತ ಹರೀಶ್ ಪೆರ್ಲರ ನಿರ್ಭಾವ ಆತ್ಮಕಥಾ ಕೃತಿ ಅವಲೋಕನ »
back to top